jai ganesha

om

Friday, 29 July 2011


ಶ್ರೀ ವಿನಾಯಕ ಕುಂಭಾಭಿಷೇಕ








ಜಯನಗರ ನಾಲ್ಕನೇ ಬಡಾವಣೆಯ ಶ್ರೀ ವಿನಾಯಕ ದೇವಾಲಯ ನಿರ್ಮಾಣವಾಗಿದ್ದು 34 ವರ್ಷಗಳ ಹಿಂದೆ. ಕ್ಷಿಪ್ರ ಪ್ರಸಾದನೆಂದೇ ಖ್ಯಾತನಾದ ಈ ಗಣಪನ ದೇವಾಲಯ ಆರಂಭದಲ್ಲಿ ಚಿಕ್ಕದಾಗಿತ್ತು. ಈಗ ಭಕ್ತಾದಿಗಳ ಸಹಕಾರದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.
ಇದರ ಶಿಲಾದೇಗುಲ ಲೋಕಾರ್ಪಣೆ ಮತ್ತು ಕುಂಭಾಭಿಷೇಕ ಮಹೋತ್ಸವ ಜುಲೈ 31 ರಿಂದ ಆ. 4ರ ವರೆಗೆ ನಡೆಯಲಿದೆ.

ನವರತ್ನ ಖಚಿತ ವಜ್ರಕವಚಧಾರಿ ವಿಘ್ನೇಶನ ದರುಶನ ಅವಿಸ್ಮರಣೀಯ. ದೇವಾಲಯ ಇರುವ ಸ್ಥಳ 1976ರಲ್ಲಿ ಖಾಲಿ ನಿವೇಶನವಾಗಿತ್ತು.
ಅಲ್ಲಿ ಅಶ್ವತ್ಥಮರದ ಅಡಿಯಲ್ಲಿ ಪುಟ್ಟ ಗಣಪತಿ ವಿಗ್ರಹ ಒಂದಿತ್ತು. ಇದು ಕೆಲವು ಆಸ್ತಿಕರನ್ನು ಆಕರ್ಷಿಸಿತು. ಇಲ್ಲಿ ಒಂದು ಪುಟ್ಟ ದೇವಾಲಯವನ್ನು ಕಟ್ಟುವ ಸಂಕಲ್ಪ ಮಾಡಿದರು.ಆದರೆ ಈ ಸ್ಥಳ ನಗರ ಪಾಲಿಕೆಗೆ ಸೇರಿತ್ತು. ನಗರಾಡಳಿತ ಇಲ್ಲಿ ವಾರ್ಡ್ ಕಚೇರಿ ಕಟ್ಟಲು ಯೋಜಿಸಿತ್ತು.
ಆಗ ಪಾಲಿಕೆ ಆಡಳಿತಗಾರರಾಗಿದ್ದ ಎನ್. ಲಕ್ಷ್ಮಣರಾವ್ ಅವರು ಜನರ ಬಯಕೆ ಅರಿತು ದೇಗುಲ ನಿರ್ಮಾಣಕ್ಕೆ ಅನುಮತಿ ನೀಡಿದರು.
ಮೊದಲು ದೇಗುಲಕ್ಕೆ ಒಂದು ಚಿಕ್ಕ ಗರ್ಭಗುಡಿ ನಿರ್ಮಿಸಿ ಕಪ್ಪುಶಿಲೆಯ ಹೊಯ್ಸಳ ಶೈಲಿಯ ಗಣಪತಿ ವಿಗ್ರಹವನ್ನು ಆಗಮೋಕ್ತ ರೀತ್ಯಾ 1977ರಲ್ಲಿ ಪ್ರತಿಷ್ಠಾಪಿಸಲಾಯಿತು.

ಇದೀಗ ಶ್ರೀ ವಿನಾಯಕ ದೇವಸ್ಥಾನದ ವಿಸ್ತರಣೆ ಮಾಡಲಾಗಿದೆ. ದಕ್ಷಿಣ ಭಾರತದ ಮಾದರಿಯಲ್ಲಿ ಪೌಳಿ, ವಿನೂತನ ಶೈಲಿಯಲ್ಲಿ ಶಿಲಾಮಯವಾಗಿ ನವೀಕರಿಸಿ ಅದರ ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಭವ್ಯವಾದ ರಾಜಗೋಪುರ ನಿರ್ಮಿಸಲಾಗಿದೆ. ಸುವರ್ಣಲೇಪಿತ ಶಿಖರ ಕಲಶಗಳು, ದಕ್ಷಿಣ ಶಿಲಾ ಭಿತ್ತಿಯ ಮೇಲೆ ದಕ್ಷಿಣಾ ಮೂರ್ತಿ, ಎಂಟು ದಿಕ್ಕಿಗೆ ಅಷ್ಟ ದಿಕ್ಪಾಲಕರುಗಳಿಂದ ಅಲಂಕರಿಸಲಾಗಿದೆ.

ಭಾನುವಾರ ಬೆಳಿಗ್ಗೆ ಗಂಗಾಪೂಜೆ.
ಮಧ್ಯಾಹ್ನ 3ಕ್ಕೆ ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಾನಪದ ಕಲಾವಿದರಿಂದ ರಾಜಬೀದಿಗಳಲ್ಲಿ 1008 ಕುಂಭಗಳ ಶೋಭಾಯಾತ್ರೆ.
ಚಾಲನೆ: ರಾಜ್ಯಸಭೆಯ ಉಪಸಭಾಪತಿ ಕೆ. ರೆಹಮಾನ್ ಖಾನ್ ಮತ್ತು ಶೋಭಾ ಕರಂದ್ಲಾಜೆ.

ಸಂಜೆ 6ಕ್ಕೆ ಸರ್ವ ಧರ್ಮ ಸಮ್ಮೇಳನ. ಉದ್ಘಾಟನೆ: ಸಂಸದ ಅನಂತಕುಮಾರ್.
ಸಾನ್ನಿಧ್ಯ: ಸ್ವಾಮಿ ಹರ್ಷಾನಂದಜೀ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ವಿಶ್ವಭೂಷಣ ತೀರ್ಥ ಶ್ರೀಗಳು, ತಿರು ಸ್ವಾಮಿ, ನಿರಂಜನಾನಂದಪುರಿ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಚಕ್ರಬಾವಿ ಸಿದ್ದಲಿಂಗ ಸಾಮೀಜಿ, ಕೊಳ್ಳೆಗಾಲದ ಶಿವಲಿಂಗ ಸ್ವಾಮೀಜಿ, ಡಾ. ಏಜಾಸುದ್ದೀನ್, ಗ್ಯಾನಿ ಬಲದೇವ ಸಿಂಗ್‌ಜೀ, ಪಾಸ್ಟರ್ ರುಬೆನ್ ಶಿಶುನಳ್ಳಿ.

ಸೋಮವಾರ ಸಂಜೆ 6ಕ್ಕೆ ರಾಜಗೋಪುರ ಪೂಜಾ ಸಮಾರಂಭ.
ಉದ್ಘಾಟನೆ: ಹೆಚ್.ಡಿ.ದೇವೇಗೌಡ. ಸಾನ್ನಿಧ್ಯ: ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ.

ನಂತರ ನ್ಯಾಮಮೂರ್ತಿ ಕೆ. ಶ್ರೀಧರ್‌ರಾವ್ ಮತ್ತು ಡಾ. ವಿ.ಎಸ್. ಆಚಾರ್ಯ ಅವರಿಂದ
ಸಾಗರದ ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿರುವ
`ಜಗದೇಕ ಸುಮುಖ` ಮತ್ತು `ಅರಿವಿನ ಆರಾಧನೆ` ಕೃತಿಗಳ ಲೋಕಾರ್ಪಣೆ.

ರಾಮಲಿಂಗಾರೆಡ್ಡಿ ಅವರಿಂದ ಕಾಮನ್‌ವೆಲ್ತ್ ವೆಟೆರ್ನರಿ ಅಸೋಸಿಯೇಷನ್ ಅಧ್ಯಕ್ಷ ಡಾ. ಎಸ್. ಅಬ್ದುಲ್ ರೆಹಮಾನ್ ಅವರಿಗೆ ಸನ್ಮಾನ.
ಸ್ಥಳ: 7ನೇ ಬಿ ಮುಖ್ಯ ರಸ್ತೆ, ಜಯನಗರ 4ನೇ ಬ್ಲಾಕ್.

No comments:

Post a Comment